

ಇಂದಿನ ವಚನ
ಸಂಸಾರವೆಂಬ ಮಹಾಘೋರಾರಣ್ಯದಲ್ಲಿ
ಹೊಲಬುಗೆಟ್ಟು, ನೆಲೆಯ ಕಾಣದೆ ಹೋದರು.
ನಿಜದ ಹೊಲಬುದಪ್ಪಿ ಬಳಲುತ್ತಿದ್ದಾರೆ ನೋಡಯ್ಯ.
ಇರುಳುಹಗಲೆನ್ನದೆ ಸಂಸಾರದಲ್ಲಿ ಸಾವುತ್ತಿದ್ದಾರೆ ನೋಡಯ್ಯ.
ಇಂತಪ್ಪ ಸಂಸಾರಾರಣ್ಯದಲ್ಲಿ,
ಹೊಲಬುಗೆಟ್ಟು ನೆಲೆಯ ಕಾಣದೆ ಹೋದರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮನರಿಯದೆ.
ವಚನಕಾರ - ಸ್ವತಂತ್ರ ಸಿದ್ಧಲಿಂಗ
- ವಚನ ಸಂಚಯ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯುತ್ತಿರುವ ನಾವುಗಳು ಒಮ್ಮೆ ನಮ್ಮ ಭಾಷೆಯ ಬೆಳವಣಿಗೆಯತ್ತ ಕಣ್ಣಾಯಿಸೋಣವೇ?
ಕನ್ನಡದ ತಾಂತ್ರಿಕ ಹಾಗೂ ವೈಜ್ಞಾನಿಕ ಬೆಳವಣಿಗೆ ನಮ್ಮ ಆಶಯ. ನೀವೂ ಕೈಜೋಡಿಸಿ. ತಂತ್ರಜ್ಞಾನದ ತಿಳಿವಿನ ಅರಿವನ್ನು ಸಂಚಯ ನಿಮ್ಮಲ್ಲೂ ಹರಿಸುವ ಆಶಯವನ್ನು ಹೊಂದಿದೆ. ನಾಳಿನ ಭವ್ಯ ಕನ್ನಡನಾಡಿಗೆ ನೀವೂ ಪುಟ್ಟದೊಂದು ತಾಂತ್ರಿಕ ಶಕ್ತಿ ಆಗಬಲ್ಲಿರಿ.